ನೀನಿರುವೆ ಎಲ್ಲೋ

ನೀನಿರುವೆ ಎಲ್ಲೋ|
ಸುಂದರ ಶಿಲ್ಪಕಲೆಯ ಗುಡಿಯಲೋ
ಈ ವನರಾಶಿ ಪ್ರಕೃತಿಯ ಮಡಿಲಲೋ|
ಶ್ರೀಮಂತರ ಸುಪ್ಪತ್ತಿಗೆಯಲೋ
ಬಟ್ಟೆ ಪೀತಾಂಬರವಿರದ
ಹರಕು ಬಟ್ಟೆಯನುಟ್ಟ
ಮುರುಕು ಮನೆಯ ತಿರುಕನಲೋ||

ಜಗಜಗಿಸುವ ವಜ್ರಖಚಿತ ಮುತ್ತುರತ್ನ
ಮುಕುಟ ಧರಿಸಿದವನಾಗಿಯೋ
ಮಣಿ ಕಂಠಮಾಲ ಚಿನ್ನದ
ಪಾದುಕೆ, ಬೆತ್ತದಾರಿಣಿಯಾಗಿಯೋ|
ಕೌಪೀನದಾರಿ, ತುಳಸೀಮಾಲಾ, ಶ್ರೀಗಂಧ
ಚೆಂದನ ಲೇಪಿತ ವಟು ಬ್ರಾಹ್ಮಣನಲ್ಲಿಯೋ||

ಲೋಕದ ಹಸಿವನೀಗಿಸೆ
ದುಡಿವ ರೈತನ ಬೆವರಹನಿಯಲ್ಲಿಯೋ|
ಚೆಂದದಾಕಳ ಕರುವ ಜಿಂಕೆಯ
ಕಣ್ಣೆಸಳ ಕಾಂತಿಯಲ್ಲಿಯೋ|
ಹೆತ್ತಮಗುವಿಗಾಗಿ ಜೀವನ ತೇಯ್ದು
ಪ್ರೀತಿಯ ಸುರಿಸುವ ತಾಯಿ ಮಮತೆಯಲ್ಲಿಯೋ|
ಕತ್ತಲೆ ತೊಳೆದು ಅಜ್ಞಾನವ
ಹೊಡೆದೋಡಿಸುವ ಜ್ಞಾನ ಜ್ಯೋತಿಯಲ್ಲಿಯೋ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹನಿ ಕತೆ
Next post ದೇಹ ಆತ್ಮ ಭಾವ

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

cheap jordans|wholesale air max|wholesale jordans|wholesale jewelry|wholesale jerseys